ಶ್ರೀಮತಿ ಎಸ್. ಭಾಗ್ಯವತಿ ಎಸ್. ನಾರಾಯಣ್ ನಿರ್ಮಿಸುತ್ತಿರುವ ’ಮುಂಜಾನೆ’ ಚಿತ್ರಕ್ಕೆ ಎಸ್. ನಾರಾಯಣ್ ಅವರ ಸ್ವಂತ ಸ್ಟುಡಿಯೊದಲ್ಲಿ ರಿರೇಕಾರ್ಡಿಂಗ್ ಕೆಲಸವು ಪೂರ್ತಿಯಾಗಿದ್ದು ಚಿತ್ರದ ಮೊದಲ ಪ್ರತಿಯ ನಿರೀಕ್ಷೆಯಲ್ಲಿದ್ದಾರೆ.
ಚೆಲುವಿನ ಚಿತ್ತಾರದ ನಂತರ ’ಶೈಲೂ’ ಇದೀಗ ’ಮುಂಜಾನೆ’ ಚಿತ್ರದಲ್ಲಿ ಮತ್ತೆ ಒಂದಾಗಿರುವ ಎಸ್. ನಾರಾಯಣ್ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ರ ಸತತವಾಗಿ ಬೆಂಗಳೂರಿನಲ್ಲಿ ಚಿತ್ರೀಕರಣವನ್ನು ಮಾಡಲಾಗಿದೆ. ಇದು ಕೇವಲ ಪ್ರೇಮ, ಪ್ರೀತಿ ಅಲ್ಲದೆ ಒಂದು ಕುಟುಂಬದಲ್ಲಿ ಹೇಗೆ ಒಬ್ಬರಿಗೊಬ್ಬರು ತ್ಯಾಗವನ್ನು ಮಾಡುತ್ತಾ ಹೋಗುತ್ತಾರೆ ಎಂಬುದು ಚಿತ್ರದ ಒಳ ತಿರುಳು.
ಈ ಚಿತ್ರದ ಕಥೆ, ಚಿತ್ರಕಥೆ ಸಂಭಾಷಣೆ, ಸಾಹಿತ್ಯ ಹಾಗೂ ಸಂಗೀತ ಎಸ್. ನಾರಾಯಣ್ ಅವರದು. ಚಿತ್ರದ ಕಥಾನಾಯಕಿ ಮಂಜರಿ ಫಡ್ನಿಸ್ ಈಗಾಗಲೇ ಹಿಂದಿ, ತೆಲುಗು ಹಾಗೂ ಕನ್ನಡದಲ್ಲಿ ’ದಿಲ್ ಖುಷ್’ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ಕಿರುತೆರೆಯ ಎರಡು ಪ್ರಭಾವಿ ಪ್ರತಿಭೆಗಳು- ಮಾಳವಿಕ ಅವಿನಾಶ್ ಹಾಗೂ ಜಿ. ರಾಜಗೋಪಾಲ್ ಜೋಷಿ ಮುಖ್ಯ ಪಾತ್ರಗಳಲ್ಲಿ ಇದ್ದಾರೆ.